ಊರ್‍ಗೇ ಬೇಕಾಗ್ತೀನಿ

ತಪ್ಪೇನಾದ್ರೂ ನನ್ನಲಿದ್ರೆ
ತೋರ್‍ಸಮ್ಮಾ ತೋರ್‍ಸಮ್ಮಾ,
ತಪ್ ತೋರ್‍ಸಿದ್ರೆ ತಿದ್ಕೋತೀನಿ
ಗುಡ್ ಬಾಯ್ ಆಗ್ತೀನ್ ಹೇಳಮ್ಮಾ

ಸೋಪ್ಹಾಕ್ ಒಗದ್ರೆ ಕೊಳಕಾದ್ ಅಂಗಿ
ಬೆಳ್ಳಗೆ ಆಗೋದಿಲ್ವಾಮ್ಮ?
ಹಾಗೇ ಶುದ್ಧ ಆಗ್ತೀನ್ ನಾನೂ
ಬುದ್ಧಿ ಮಾತು ಹೇಳಮ್ಮಾ

ತಪ್ ತೋರ್‍ಸಿದ್ರೆ ಅಪ್ಪನ ಹಾಗೆ
ಸಿಟ್‌ಗಿಟ್ ಮಾಡೋದಿಲ್ಲ!
ತಿದ್ಕೊಂಡ್ ಜಾಣ ಆದ್ರೆ ಮುಂದೆ
ನನಗೇ ಒಳ್ಳೇದಲ್ವ?

ಓದಿ ಬರ್‍ದು ದೊಡ್ಡೋನಾಗಿ
ಊರ್‍ಗೇ ಬೇಕಾಗ್ತೀನಿ,
ಇಂಥೋನ್ ತಾಯಿ ಎಷ್ಟ್ ಒಳ್ಳೇವ್ರೋ
ಅಂತ ಅನ್ನಿಸ್ತೀನಿ!

ತಂದೆ ತಾಯ್ಗೆ ಸ್ಕೂಲ್ಗೆ, ಕೇರಿಗೆ
ಒಳ್ಳೇ ಹೆಸ್ರು ತಂದ್ರೆ
ಎಷ್ಟೊಂದ್ ಖುಷಿ ಜನಕ್ಕೆ, ಬಳ್ಳೀ
ತುಂಬ ಹೂ ಸುರಿದ್ಹಂಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೯೫
Next post ಚೋಟಪ್ಪನ ಗೆಳೆಯರು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys